Friday, November 20, 2009

Discovering the spirit of patriotism


Patriotism’ is a fascinating word for youth of any country. For this word fills in them a zeal to serve the nation with utmost commitment and dedication. A Patriot is defined in a dictionary as a person devoted to the duty of defending the country’. Hence ‘patriotism’ is related with the act of defending one’s country when the time necessitates.

But the youth of Coastal Karnataka are discovering and redefining the spirit of patriotism. “We emphasise a lot on defending our country, when attacked by enemy. But we often forget the fact that waging a war against rampant corruption too is as important as disarming the enemy” says Prakash G R, a student of MSW at SDM College in Ujire. Waging a war against the enemy in the battlefield alone is not patriotism. ``Grabbing initiatives to eradicate social evils is also an act of patriotism,'' he insists.

Sanskrit lecturer in Bhandarkar’s College, Kundapur, Prasanna Kumar Aithal express opinions in a similar vein. “This nation belongs to us. We must develop a concern for this land of sages and saints. This concern will prompt us to work for the country rather than working for self. “Let there be no doubt that the soldiers braving bullets fired by the enemy is an extraordinary act of patriotism. But, becoming a soldier is not the only way to express patriotism,’’ he believes.
The love for their motherland which compels individuals to protect and preserve land, rivers, forests, natural resources is patriotism, according to me, the lecturer adds. Every inch of this land belongs to us. This nature is ours. Every individual on this land is my brother/friend. This is the true spirit of patriotism. The obnoxious attitude that refuses to accept the poorest of the poor as our own is not patriotism” Rohinaksha Shirlalu, Kannada lecturer at Vivekananda College in Puttur Rohinaksha Shiralu asserts .

However, many youth are still discovering the spirit of patriotism. “Defending the country when the enemy attacks us is patriotism” says a post graduation student while another PG student is of the opinion that just loving your country is sign of patriotism”. Another student ,informs that patriotism cannot be defined.

Aithal adds. The British during their rule in India were the common enemy to every patriotic in this country. But as the country secured independence, the common enemy was vanquished and found a new enemy in the form of Pakistan. A surprising fact is that the organisations that raise their voice against poor infrastructure are not being recognised by masses as patriots. Those who protest against deforestation, corruption, casteism aren’t yet referred as ‘patriots’. However, the intensity of their work is no less compared to a popular patriot.

When the nation is rejoicing its 62nd independence day it is the time for all of us to be patriotic and make ourselves clear on what patriotism actually is. Some can never become soldiers due to many factors. For those who cannot join the armed forces and show their patriotism, practicing the ideals propounded in the Constitution of India in both letter and spirit is certainly a true and simplest way to be patriotic!
Author is a student of Journalism and Mass Communication | joshi.viju@gmail.com

Thursday, November 19, 2009

ಮೂಲಗಳೇ ಎಲ್ಲಕ್ಕೂ ಮೂಲ!

ವಿನಾಯಕ ಭಟ್ ಕ್ರೈ ವರದಿಗಾರಿಕೆ ಸರಣಿಯ ಎರಡನೇ ಲೇಖನವನ್ನು ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳಿದ್ದರೆ ನಮ್ಮ fivewoneh2009@gmail.com ಗೆ ಕಳುಹಿಸಬಹುದು.

ಸುದ್ದಿಮೂಲಗಳು ಎಲ್ಲ ಪತ್ರಕರ್ತನಿಗೂ ಅಗತ್ಯ. ಆದರೆ ಕ್ರೈಂ ವರದಿಗಾರನಿಗೆ ಮೂಲಗಳೇ ಜೀವಾಳ. ಘಟನೆ ನಡೆದ ಮಾಹಿತಿಯಿಂದ ಆರಂಭಿಸಿ, ನಿಮ್ಮ ವರದಿಯ ಹೂರಣವೆಲ್ಲ ಮೂಲಗಳ ಮೂಲಕವೇ ತಿಳಿದುಬರಬೇಕು.

ಹಿಂದಿನ ಲೇಖನದಲ್ಲಿ ಹೇಳಿದಂತೆ ಯಾರೂ ನಿಮ್ಮನ್ನು ಅಪರಾಧ ವರದಿಗಾಗಿ ಕರೆಯುವುದಿಲ್ಲ. ಹೀಗಾಗಿ ಏನೇ ಸುದ್ದಿ ಬರಬೇಕಾದರೂ ನಿಮಗೆ ಮೂಲಗಳೇ ಆಧಾರ. ಬೇರಾವುದೇ ಸುದ್ದಿ ಸ್ವಲ್ಪ ತಡವಾಗಿ ಬಂದರೂ ಆಗಬಹುದು. ಆದರೆ ಕ್ರೈಂ ಸುದ್ದಿ ನಿಮಗೆ ಎಷ್ಟು ಸಾದ್ಯವೋ ಅಷ್ಟು ಬೇಗ ನಿಮಗೆ ಗೊತ್ತಾಗಬೇಕು. ಮೊದಲೇ ಬಂದರೆ ಉತ್ತಮ!!

ಕೊಲೆ, ಅನುಮಾನಾಸ್ಪದ ಸಾವು, ಅಪಘಾತ ಇವುಗಳ ಸುದ್ದಿ ನಿಮಗೆ ಬೇಗ ಗೊತ್ತಾಗಬೇಕು. ಅದನ್ನು ಆಧರಿಸಿ ನೀವು ಅಥವಾ ನಿಮ್ಮ ಫೋಟೋಗ್ರಾಫರ್ ಸ್ಥಳಕ್ಕೆ ತಲುಪಬೇಕು. ಅಂದರೆ ಮಾತ್ರ ನಿಮಗೆ ಉತ್ತಮ ಚಿತ್ರ ಲಭಿಸಲು ಸಾದ್ಯ. ವರದಿಗಾರ ಕೂಡ ಎಷ್ಟು ಮೊದಲು ಸ್ಥಳಕ್ಕೆ ತಲುಪುತ್ತಾನೋ ಅಷ್ಟು ಒಳ್ಳೆಯದು. ಅಂದಾಗ ಮಾತ್ರ ಅಲ್ಲಿನ ನಿಜ ಸ್ಥಿತಿ ಅರಿಯಲು ಸಾದ್ಯ.

ನೀವು ಸ್ಥಳಕ್ಕೆ ಮೊದಲೇ ತಲುಪಿದರೆ ಅಲ್ಲಿ ಏನಾಯಿತು, ಕೊಲೆ, ಕಳ್ಳತನ, ಅಪಘಾತ ಹೇಗೆ ನಡೆದಿರಬಹುದು? ಅದರ ನಂತರ ಪೊಲೀಸರು ಎಷ್ಟು ಬೇಗ ಬಂದರು? ಬಂದು ಏನು ಮಾಡಿದರು? ಇದನ್ನೆಲ್ಲ ನೀವು ತಿಳಿದುಕೊಳ್ಳಲು, ನೋಡಲು ಸಾದ್ಯ. ನನ್ನ ಅನುಭವದ ಪ್ರಕಾರ ನೀವು ಅಪರಾಧ ಘಟಿಸಿದ ಸ್ಥಳಕ್ಕೆ ಭೇಟಿ ನೀಡಿದರೆ, ಭೇಟಿ ನೀಡದ ಬೇರೆ ಪತ್ರಿಕೆಯ ವರದಿಗಾರನಿಗಿಂತ ಖಂಡಿತವಾಗಿಯೂ ಉತ್ತಮ ವರದಿ ಬರೆಯಬಲ್ಲಿರಿ.

ಇನ್ನೊಂದು ವಿಷಯ ನೆನಪಿಟ್ಟುಕೊಳ್ಳಬೇಕು. ಕ್ರೈಂ ಸುದ್ದಿ ಮೂಲಗಳು ದೊರೆಯಬೇಕಾದರೆ ನೀವು ಅವರೊಂದಿಗೆ ಉತ್ತಮ ಭಾಂದವ್ಯ, ಗೆಳೆತನ ಹೊಂದಿರಬೇಕು. ಹಲವಾರು ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಬಗ್ಗೆ ಇತರಿಗಿರುವ ದ್ವೇಷವೇ ಸುದ್ದಿ ನೀಡಲು ಕಾರಣವಾಗಿರುತ್ತದೆ. ಆದರೆ ಕ್ರೈಂನಲ್ಲಿ ಅಂತಹ ಅವಕಾಶಗಳು ಕಡಿಮೆ. ಕಳ್ಳನೋ, ಕೊಲೆಗಾರನೋ, ಅಪಘಾತದ ಬಗ್ಗೆಯೋ ಪತ್ರಕರ್ತರಿಗೆ ಮಾಹಿತಿಕೊಟ್ಟು ಪೊಲೀಸರಿಗೆ ಆಗಬೇಕಾಗಿದ್ದೇನು? ಆದರೂ ಅವರು ನಿಮಗೆ ಅವರು ಸುದ್ದಿ ಕೊಡಬೇಕೆಂದರೆ ನಿಮ್ಮ ಅವರ ನಡುವೆ ಅಷ್ಟೊಳ್ಳೆ ಸಾಂಪರ್ಕ ಇರಬೇಕು. ಪ್ರತಿ ಮನುಷ್ಯನಿಗೂ ತನಗೆ ಗೊತ್ತಿರುವುದನ್ನು, ಅದರಲ್ಲೂ ವಿಶೇಷವಾಗಿ ತನಗೊಬ್ಬನಿಗೇ ಅಥವಾ ಕಡಿಮೆ ಜನರಿಗೆ ಗೊತ್ತಿರುವುದನ್ನು ಯಾರಿಗಾದರೂ ಹೇಳಬೇಕು ಎಂಬ ತವಕ ಇದ್ದೇ ಇರುತ್ತದೆ. ಅದನ್ನು ನೀವು ಬಳಸಿಕೊಳ್ಳಬಹುದು. ಹಾಗೆ ಯಾವುದೇ ಸುದ್ದಿಯನ್ನು ಯಾರಿಗಾದರೂ ಹೇಳಬೇಕು ಅಂತ ಯಾವುದೇ ಪೊಲೀಸನಿಗೆ ಅನ್ನಿಸಿದಾಗ, ಆತನಿಗೆ ನಿಮ್ಮ ನೆನಪಾಗಬೇಕು.

ಹೀಗಾಗಬೇಕಾದರೆ ನೀವು ಅವನೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಒಳ್ಳೆಯ ಗೆಳೆತನ ಬೆಳೆಸಿರಬೇಕು. ಎಷ್ಟೋ ಬಾರಿ ಇಂತಹ ಗೆಳೆತನದ ಪರಿಣಾಮ ನಿಮಗೆ ಎಷ್ಟೋ ಸುದ್ದಿಗಳು ಗೊತ್ತಾಗಬಹುದು. ಆದರೆ ಎಲ್ಲದನ್ನೂ ಪ್ರಕಟಿಸುತ್ತೇನೆಂಬ ಹುಚ್ಚುತನ ಬೇಡ. ಸುದ್ದಿ ಕೊಟ್ಟವರ ಬಗ್ಗೆ ಕಾಳಜಿ ಹಾಗೂ ಅವರ ನಂಬಿಕೆ ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಒಂದು ದಿನ ನೀವು ಹೀಗೆ ಅವರು ಹೇಳಿದ್ದನ್ನೆಲ್ಲ ಬರೆದುಬಿಡಬಹುದು. ಆದರೆ ಮುಂದೆ ಅವರಿಂದ ನಿಮಗೆ ಸುದ್ದಿ ಸಿಗುವುದಿಲ್ಲ ಎಂಬುದನ್ನು ನೆನಪಿಟ್ಟಿರಿ.

ಅಪರಾಧ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸುವ ಎಲ್ಲ ವರದಿಗಾರರೂ ಉತ್ತಮ ಕ್ರೈಂ ವರದಿಗಾರರಾಗಲಾರರು. ಸ್ಥಳದಲ್ಲಿ ಸಿಕ್ಕ ಮಾಹಿತಿ ಶೇ.೫೦ರಷ್ಟಾದರೆ ತನಿಖಾಧಿಕಾರಿ ಅಥವಾ ಪೊಲೀಸರಿಂದ ಪಡೆದ ಮಾಹಿತಿ ಮಾತ್ರ ನಿಮ್ಮ ವರದಿಯನ್ನು ಗಟ್ಟಿಗೊಳಿಸಬಲ್ಲದು. ಅದಕ್ಕೆ ಪೊಲೀಸರ ನಿಕಟ ಸಂಪರ್ಕ ಅಗತ್ಯ. ಅದಕ್ಕಾಗಿ ನೀವು ಸಮಯವಿದ್ದಾಗ ಪೊಲೀಸ್ ಅಧಿಕಾರಿಗಳ ಜೊತೆ ಹರಟುವುದು ರೂಢಿಸಿಕೊಂಡರೆ ಉತ್ತಮ.

ಈ ಹರಟೆಯಿಂದ ೨ ಲಾಭವಿದೆ. ಮೊದಲೆಯದಾಗಿ ನಿಮ್ಮ ಅವರ ಆಪ್ತತೆ ಹೆಚ್ಚುತ್ತದೆ. ೨ನೇಯದಾಗಿ ಮಾತಿನ ನಡುವೆ ಕೆಲವು ಹೊಸ ವಿಷಯಗಳು ಸಿಗುತ್ತವೆ. ಆಪ್ತರಾಗಿದ್ದರೆ ಸಹಜವಾಗಿ ನೀವು ಕರೆ ಮಾಡಿದಾಗ ಇತರರಿಗೆ ಕೊಟ್ಟಿದ್ದಕ್ಕಿಂತ ಹೆಚ್ಚು ಮಾಹಿತಿ ನಿಮಗೆ ಸಿಕ್ಕೇ ಸಿಗುತ್ತದೆ.

ಎಷ್ಟೇ ಗೆಳೆಯರಾಗಿರಲಿ. ಪೊಲೀಸರು ಎಷ್ಟು ಮಾಹಿತಿ ಕೊಡಬೇಕೋ ಅಷ್ಟೇ ಮಾಹಿತಿ ಕೊಡುತ್ತಾರೆ. ಹಾಗಾಗಿ ನೀವು ೨-೩ ಮೂಲಗಳನ್ನು ಹೊಂದಿರಬೇಕಾದ್ದು ಅನಿವಾರ್ಯ, ಐಜಿ, ಎಸ್ಪಿಯಿಂದ ಆರಂಭಿಸಿ, ಕಾನ್‌ಸ್ಟೆಬಲ್, ಅಧಿಕಾರಿಗಳ ಚಾಲಕರು ಕೂಡ ನಿಮ್ಮ ಮೂಲಗಳ ಪಟ್ಟಿಯಲ್ಲಿದ್ದರೆ ಮಾತ್ರ ನೀವು ಬಚಾವ್!

ಅಧಿಕಾರಿ ಎಷ್ಟೇ ಆಪ್ತನಾಗಿದ್ದರೂ ಅವರ ಠಾಣೆ ವ್ಯಾಪ್ತಿಯಲ್ಲಾದ ಅಪರಾಧ ಘಟನೆಗಳನ್ನು ನಿಮಗೆ ಆತ ಹೇಳುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ನಿಮಗೆ ಸಹಾಯಕ್ಕೆ ಬರುವುದು ಪೊಲೀಸ್ ನಿಯಂತ್ರಣ ಕೊಠಡಿ. ಅಲ್ಲಿ ಕೆಲಸ ಮಾಡುವವರು ನಿಮ್ಮ ಸುದ್ದಿ ಮೂಲಗಳಾಬಿಟ್ಟರೆ ನಿಮ್ಮಷ್ಟು ಸುಖಿ ಕ್ರೈಂ ವರದಿಗಾರ ಇನ್ನೊಬ್ಬನಿಲ್ಲ. ಪೊಲೀಸ್ ನಿಯಂತ್ರಣ ಕೊಠಡಿಗೆ ಎಲ್ಲ ಕಡೆಯ ಸುದ್ದಿಗಳು ಕ್ಷಣ ಕ್ಷಣಕ್ಕೆ ಬರುತ್ತಿರುತ್ತದೆ. ಅಲ್ಲಿ ಕೆಲಸ ಮಾಡುವವರು ನಿಮ್ಮ ಸುದ್ದಿ ಮೂಲವಾಗಿದ್ದರೆ ನಿಮಗೇ ಮೊದಲು ಸುದ್ದಿ ಸಿಗುವುದು ಗ್ಯಾರಂಟಿ.

ಆದರೆ ಅಪರಾಧಿಗಳನ್ನು ಬಂಧಿಸಿದ್ದು, ಎಲ್ಲೋ ದಾಳಿ ನಡೆದಿದ್ದು ಮುಂತಾದ ಸುದ್ದಿಗೆ ನಿಯಂತ್ರಣ ಕೊಠಡಿ ಮೂಲಗಳು ಕೆಲಸಕ್ಕೆ ಬರುವುದಿಲ್ಲ. ಅದಕ್ಕೆ ನೀವು ಠಾಣೆಗಳಲ್ಲಿರುವ ಪೊಲೀಸರನ್ನೇ ಅವಲಂಬಿಸಬೇಕಾಗುತ್ತದೆ.

ಸುದ್ದಿಮೂಲಗಳ ಗೌಪ್ಯ, ನಂಬಿಕೆ ಕಾಪಾಡಬೇಕೆಂಬುದು ಪತ್ರಕರ್ತನ ಮೂಲಮಂತ್ರ. ಅದು ಕ್ರೈಂ ವರದಿಯಲ್ಲಿ ಇತರ ಕ್ಷೇತ್ರಗಳಿಗಿಂತ ಹೆಚ್ಚು.

ಸುದ್ದಿ ಸಿಗಬೇಕೆಂದಾದರೆ ಪೊಲೀಸರೊಟ್ಟಿಗೆ ಉತ್ತಮ ಸಂಬಂಧ, ಗೆಳೆತನ ಇರಬೇಕು. ಹಾಗಾದರೆ ಅವರ ಬಗ್ಗೆ ಬರೆಯದೆ ಸುಮ್ಮನಿರಬೇಕೆ? ಎಂದು ನೀವು ಕೇಳಬಹುದು. ಹಾಗೇನಿಲ್ಲ. ನೀವು ಪ್ರಾಮಾಣಿಕರೂ, ನಿಷ್ಟಾವಂತರೂ ಆಗಿದ್ದರೆ ನೀವು ಅವರ ವಿರುದ್ಧ ಬರೆದೂ, ಸುದ್ದಿ ಪಡೆಯಬಹುದು. ಆದರೆ ನೀವು ಪೊಲೀಸರ ಬಳಿ ಏನಾದರೂ ಕೆಲಸ ಮಾಡಿಸಿಕೊಂಡು, ನಂತರ ಅವರ ವಿರುದ್ಧ ಬರೆಯಲು ಹೋದರೆ ಬಣ್ಣಗೆಟ್ಟೀತು. ನೀವು ನಿಷ್ಟಾವಂತರಾಗಿದ್ದರೆ, ನೀವು ಬರೆದಿದ್ದು ಸರಿಯಾಗಿದ್ದರೆ ಅವರು ಸಹಜವಾಗಿ ಅದನ್ನು ಒಪ್ಪಿಕೊಳ್ಳುತ್ತಾರೆ. ತಪ್ಪಿದ್ದಾಗ ತಪ್ಪೆಂದು, ಸರಿಯಿದ್ದಾಗ ಸರಿಯೆಂದು ಬರೆದರೆ ಆಗ ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ. ಅನಗತ್ಯವಾಗಿ ನಿಮ್ಮ ಮೇಲೆ ಕೋಪ ಮಾಡಿಕೊಂಡು, ಸೇಡು ತೀರಿಸಲು ಕಾಯುವುದಿಲ್ಲ. ಆದರೆ ವಯಕ್ತಿಕ ಕಾರಣಕ್ಕಾಗಿ ನೀವು ಅವರನ್ನು ಸುಮ್ಮ ಸುಮ್ಮನೆ ನಿಂದಿಸ ಹೊರಟರೆ ಪರಿಸ್ಥಿತಿ ಕೈಮೀರಿದರೂ ಮೀರಬಹುದು. ಅಂತಹ ಹಲವಾರು ಘಟನೆಗಳು ನಡೆದಿವೆ. ಆ ಹಂತಕ್ಕೆ ಹೋಗದಿರಿ.

Tuesday, November 17, 2009

ಸುದ್ದಿ ಮೂಲ ಹೇಗೆ ಹುಡುಕುತ್ತೀರಿ?

ಸುದ್ದಿ ಮೂಲ ಹೇಗೆ ಹುಡುಕುತ್ತೀರಿ ? ಮತ್ತು ಅದರ ಸತ್ಯಾಸತ್ಯತೆಗಳನ್ನು ಹೇಗೆ ಶೋಧಿಸುತ್ತೀರಿ ?
ಪ್ರತಿ ವರದಿಗಾರನಿಗೂ ಬೀಟ್ ಎಂದು ಇರುವುದು ಸಾಮಾನ್ಯ ; ಪೊಲೀಸರಿಗೆ ಇದ್ದ ಹಾಗೆಯೇ. ದಿನ ಪತ್ರಿಕೆಯ ಕೆಲಸಕ್ಕೂ, ವಾರಪತ್ರಿಕೆ ಇತ್ಯಾದಿಗೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸುದ್ದಿ ಪೈಪೋಟಿಯ ಹಿನ್ನೆಲೆಯಲ್ಲಿ ವರದಿಗಾರರ ದಿನಚರಿಯೇ ಬದಲಾಗಿ ಹೋಗಿದೆ.

ಬಹಳ ಪ್ರಮುಖ ವಿಷಯಗಳನ್ನು ಆಧರಿಸಿ ಬೀಟ್ ಎಂದು ಹಂಚಲಾಗುತ್ತದೆ. ಉದಾಹರಣೆಗೆ ಅಪರಾಧ ವಿಭಾಗವನ್ನು ಒಬ್ಬ ನೋಡಿಕೊಂಡರೆ, ಮತ್ತೊಬ್ಬನಿಗೆ ರಾಜಕೀಯ ಬೆಳವಣಿಗೆಗಳ ನಿರ್ವಹಣೆ, ಶಿಕ್ಷಣ, ಆರೋಗ್ಯ- ಹೀಗೆ ಹಂಚಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಆಗುವ ಬೆಳವಣಿಗೆಗಳ ಮೇಲೆ ನಿಗಾ ಇಟ್ಟು ವರದಿ ಮಾಡಬೇಕು. ಬೇರೆ ಪೇಪರ್‍ನಲ್ಲಿ ಸುದ್ದಿ ಬಂದರೆ ಅದು ನಮಗೆ ಮಿಸ್ ಆದಂತೆ. ಅದಕ್ಕೆ ನಾವು ಉತ್ತರಿಸಬೇಕು.
ಹೀಗೆ ಆಯಾ ವರದಿಗಾರರು ತಮಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸುದ್ದಿ ಮೂಲಗಳನ್ನು ಹುಡುಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಪ್ರತಿ ವರದಿಗಾರರು ಹಲವು ವಲಯಗಳಲ್ಲಿ ಸುದ್ದಿ ಮೂಲಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಇಲ್ಲಿ ಯಾರನ್ನೂ ಉಪೇಕ್ಷಿಸುವಂತಿಲ್ಲ. ಗುಮಾಸ್ತನಿಂದ ಹಿಡಿದು ಉನ್ನತ ಅಧಿಕಾರಿವರೆಗೂ ವಿವಿಧ ಹಂತಗಳ ಸುದ್ದಿಮೂಲಗಳು.

ಸುದ್ದಿಯ ವಾಸನೆ ಸಿಗುವುದು ಕೆಳ ಹಂತದ ಅಧಿಕಾರಿಗಳಿಂದ. ಅದು ಕನ್‌ಫರ್ಮ್ ಆಗುವುದು ಉನ್ನತ ಅಧಿಕಾರಿಗಳಿಂದ. ಆದ್ದರಿಂದ ನಮ್ಮ ಸುದ್ದಿ ಮೂಲಗಳನ್ನು ಚೆನ್ನಾಗಿ (ಅಂದರೆ ತಿಂಡಿ ಕೊಡಿಸಿ, ಹಣ ಕೊಡಿಸಿಯಲ್ಲ) ವಿಶ್ವಾಸದಿಂದ ಇಟ್ಟುಕೊಳ್ಳಬೇಕು. ಇದು ಬರಿಯ ಅಧಿಕಾರಿಗಳೆಂದೇ ಅಲ್ಲ. ಸುದ್ದಿ ಮೂಲಗಳು ಪ್ರತಿ ವಿಷಯಕ್ಕೂ ಸಂಬಂಧಿಸಿ ಬದಲಾಗುತ್ತಾ ಹೋಗುತ್ತದೆ.

ಎರಡನೆಯದಾಗಿ ನಮ್ಮ ಸುದ್ದಿ ಮೂಲಗಳ ಸತ್ಯಾಸತ್ಯತೆಗಳನ್ನು ಶೋಧಿಸುವ ಬಗೆ. ಇದು ಸಂಪೂರ್ಣ ವಿಶ್ವಾಸದ ನೆಲೆಯಲ್ಲಿ ನಡೆಯುವಂಥದ್ದು. ನಾವೂ ಸಹ ಕೊಟ್ಟದ್ದನ್ನೆಲ್ಲಾ ಸುದ್ದಿಗಳೆಂದು ಬರೆಯುವುದಿಲ್ಲ. ಅದನ್ನು ಬೆನ್ನು ಹತ್ತಿ ಅದರ ವಿವಿಧ ನೆಲೆಗಳನ್ನು ಶೋಧಿಸುತ್ತೇವೆ. ನಂತರ ನಮಗೆ ವಿಶ್ವಾಸ ಮೂಡಿದ್ದಲ್ಲಿ ಮಾತ್ರ ನಮ್ಮ ಮುಖ್ಯ ವರದಿಗಾರರಿಗೆ, ಸಂಪಾದಕರಿಗೆ ಇಂಥದೊಂದು ಸುದ್ದಿಯಿದೆ ಎಂಬ ಗುಟ್ಟು ಬಿಟ್ಟುಕೊಡುತ್ತೇವೆ. ಅಲ್ಲಿಯವರೆಗೆ ಆ ಕುರಿತು ಏನನ್ನೂ ಹೇಳುವುದಿಲ್ಲ. “ಕ್ರಾಸ್ ಚೆಕ್’ ಎಂಬುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದರೆ ತಪ್ಪೇನೂ ಇಲ್ಲ. ಅದಿಲ್ಲದೇ ನಾವು ಮುಂದುವರಿಯುವುದಿಲ್ಲ. ಕೆಲವೊಮ್ಮೆ ಇಷ್ಟೆಲ್ಲಾ ಆದ ಮೇಲೂ ಎಡವಿದ್ದು ಇದೆ ; ಅದು ಸಾಮಾನ್ಯ.

Saturday, November 14, 2009

ವರದಿಗಾರನಿಗೆ ಸಾಮಾನ್ಯ ಜ್ಞಾನ ಇರಲೇ ಬೇಕು

ವರದಿಗಾರಿಕೆ ಅತ್ಯಂತ ಕುತೂಹಲವಾದದ್ದು. ಜತೆಗೆ ಜನರೊಂದಿಗೆ ನಿತ್ಯವೂ ನಮ್ಮನ್ನು ಸಂಪರ್ಕವಿಡುವಂಥದ್ದು. ನನಗೂ ಮೊದಲು ವರದಿಗಾರಿಕೆಗೆ ಹೋದಾಗ ಸಹಜವಾಗಿ ಭಯವಾಗಿತ್ತು. ಅದನ್ನು ನಾನು ನನ್ನ “ಬ್ರಹ್ಮಚಾರಿಗಳ ಪುಟಗಳು’ ಬ್ಲಾಗಿನಲ್ಲಿನ ಧಾರಾವಾಹಿಯಲ್ಲಿ ಹೇಳಿಕೊಂಡಿದ್ದೆ.
ವರದಿಗಾರಿಕೆ ಮಾಡುವುದು ಎಲ್ಲರೂ ತಿಳಿದಂತೆ ಕಷ್ಟವಲ್ಲ. ಮೊನ್ನೆ ಒಬ್ಬರು ಇಂಟರ್ನ್‌ಶಿಪ್‌ಗೆ ಬಂದಿದ್ದ ಪತ್ರಿಕೋದ್ಯಮ ವಿದ್ಯಾರ್ಥಿಯ ಬಳಿ ಈ ಬಗ್ಗೆ ಸುಮಾರು ಹೊತ್ತು ಮಾತನಾಡಿದೆ. ಬಹಳಷ್ಟು ಬಾರಿ ಅನಿಸುವ ಸಂಗತಿಯೆಂದರೆ ( ಇದು ಎಲ್ಲರಿಗೂ ಇಷ್ಟವಾಗದಿರಬಹುದು) ವರದಿಗಾರಿಕೆಗಾಗಲೀ, ಸುದ್ದಿ ಸಂಪಾದನೆ (ಎಡಿಟಿಂಗ್) ಗಾಗಲೀ “ಸಾಮಾನ್ಯ ಜ್ಞಾನ’ (ಕಾಮನ್ ಸೆನ್ಸ್) ಅತ್ಯವಶ್ಯ. ಇದರರ್ಥ ವಿಶೇಷ ಜ್ಞಾನ, ಪರಿಣತಿ ಇರಬಾರದೆಂದಲ್ಲ. ಇದ್ದರೆ ಅದು ಪೂರಕ (ಸಪ್ಲಿಮೆಂಟ್). ಆದರೆ ಮೂಲವಾದುದು ಸಾಮಾನ್ಯಜ್ಞಾನ. ಇಂಟೆಲ್‌ಕ್ಚುಯಲಿಟಿಯಿಂದ ಇಲ್ಲಿ ಪ್ರಯೋಜನ ಕಡಿಮೆ.

ವರದಿಗಾರಿಕೆ ಮಾಡುವವರಿಗೆ ಮೊದಲು ನಿತ್ಯದ ಬೆಳವಣಿಗೆಗಳ ಅರಿವಿರಬೇಕು. ಹಾಗೆಯೇ ಪ್ರತಿ ಬೆಳವಣಿಗೆಗಳ ಭವಿಷ್ಯವನ್ನು ಅಂದಾಜು ಮಾಡುವ ಸಾಮರ್ಥ್ಯ ಇರಬೇಕು. ಉದಾಹರಣೆಗೆ ರಾಜ್ಯಾದ್ಯಂತ ನಾಳೆಯಿಂದ ಬೆಳಗ್ಗೆ 9 ಕ್ಕೆ ಶಾಲೆ ಆರಂಭ. ಇದುವರೆಗೆ 9.30 ಕ್ಕೆ ಆರಂಭವಾಗುತ್ತಿತ್ತು ಎಂಬ ಶಿಕ್ಷಣ ಇಲಾಖೆ ಪ್ರಕಟಣೆಯನ್ನು ಇಟ್ಟುಕೊಂಡು ಅದರಿಂದುಂಟಾಗುವ ಸರಣಿ ಬೆಳವಣಿಗೆಗಳನ್ನು ಗ್ರಹಿಸಬೇಕು. ಇಂದಿನ ಪೋಷಕರು ತಮ್ಮ ಎಲ್ಲ ಚಟುವಟಿಕೆಗಳನ್ನು ಅರ್ಧ ಗಂಟೆ ಮುಂಚಿತವಾಗಿಯೇ ರೂಪಿಸಿಕೊಳ್ಳಬೇಕು. ಇದನ್ನು ಅರ್ಥವತ್ತಾಗಿ ಬರೆದರೆ ಒಂದು ಮಾನವೀಯ ವರದಿ.
ಹಾಗಾಗಿ ನಿತ್ಯ ಬೆಳವಣಿಗೆಗಳ ಪರಿಣಾಮ ಗ್ರಹಿಸುವ ಸಾಮರ್ಥ್ಯ ಅಗತ್ಯ. ಇದೇನೂ ಕಷ್ಟವಲ್ಲ. ನಿತ್ಯವೂ ರೂಢಿಸಿಕೊಂಡುಹೋಗುವಂಥದ್ದು.

* ವರದಿಗಾರಿಕೆಗೆ ಹೋಗುವ ಮೊದಲು ಸಂಬಂಧಪಟ್ಟ ಕಾರ್‍ಯಕ್ರಮದ ವಿಷಯದ ಬಗ್ಗೆ ಮೊದಲೇ ತಿಳಿದಿದ್ದರೆ ಅದಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ತಿಳಿದು ಹೋಗಿ. ಇದರಿಂದ ಅಲ್ಲಿ ಚರ್ಚೆಯಾಗುವ ವಿಷಯ ಹೆಚ್ಚು ಸ್ಪಷ್ಟವಾಗುತ್ತದೆ.

* ನೀವು ಕಾರ್ಯಕ್ರಮದಲ್ಲಿ ಮಾತನಾಡುವುದನ್ನೆಲ್ಲಾ (ಮುಖ್ಯ ಸಂಗತಿ) ಬರೆದುಕೊಂಡು ಬನ್ನಿ. ಅನುಮಾನಗಳಿದ್ದರೆ ಸಂಬಂಧಪಟ್ಟ ಭಾಷಣಕಾರರನ್ನೇ ನಂತರ ಕೇಳಿ. ಇದರಿಂದ ಮರ್ಯಾದೆಯೇನೂ ಹೋಗುವುದಿಲ್ಲ. ಅಸ್ಪಷ್ಟ ಮತ್ತು ತಪ್ಪಾದ ಸಂಗತಿ ಬರೆದು ಎಲ್ಲರನ್ನೂ ದಾರಿ ತಪ್ಪಿಸುವುದಕ್ಕಿಂತ ನಮ್ಮ ಅನುಮಾನ ಬಗೆಹರಿಸಿಕೊಂಡು ಸರಿಯಾದುದನ್ನೇ ಬರೆಯುವುದು ಸರಿ.

* ನಂತರವೂ ಅನುಮಾನಗಳಿದ್ದರೆ ನಿಮ್ಮ ಹಿರಿಯರೊಂದಿಗೆ (ಕಚೇರಿಯಲ್ಲಿರುವ) ಚರ್ಚಿಸಿ. ಇಲ್ಲವಾದರೆ ಆ ಸಂಬಂಧಪಟ್ಟ ವಿಷಯತಜ್ಞರನ್ನು ಕೇಳಿ. ಒಟ್ಟೂ ವಿಷಯವನ್ನು ನಿಮ್ಮೊಳಗೆ ಮೊದಲು ಸ್ಪಷ್ಟಗೊಳಿಸಿಕೊಳ್ಳಿ. ಆಮೇಲೆ ಯಾವುದು ಹೆಚ್ಚು ಚರ್ಚಿತವಾಗಬಲ್ಲದೋ, ಸುದ್ದಿ ಎನಿಸಬಲ್ಲದೋ ಅದನ್ನು ಬರೆಯಿರಿ. ಯಾವಾಗಲೂ ಸರಣಿ ಘಟನೆಗಳು ಮುಖ್ಯ. ಉದಾಹರಣೆಗೆ ಲೋಕಾಯುಕ್ತರು ಗಣಿ ವರದಿಯನ್ನು ಶೀಘ್ರವೇ ಕೊಡುವುದಾಗಿ ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಸರಕಾರವಾಗಲೀ, ಗಣಿ ಉದ್ದಿಮೆದಾರರಾಗಲೀ, ಅಧಿಕಾರಿಗಳಿಗಾಗಲೀ ಪ್ರತಿಕ್ರಿಯಿಸಿದರೆ ಅದು ಸುದ್ದಿ. ಇದನ್ನು ಸರಣಿ ಘಟನೆಗಳೆಂದು ಹೇಳಬಹುದು. ಇದೊಂದು ಉದಾಹರಣೆಯಷ್ಟೇ.

ಇನ್ನು ಸಂದರ್ಶನಕ್ಕೆ ಹೋಗುವಾಗ ಸಿದ್ಧವಾಗುವ ಬಗೆ ಹಾಗೂ ವರದಿಗಾರಿಕೆಯಲ್ಲಿ ಬರುವ ಮುಖ್ಯಾಂಶಗಳನ್ನು ಮತ್ತೊಮ್ಮೆ ಹೇಳುತ್ತೇನೆ. ಸುದ್ದಿ ಯಾವುದು ಎನ್ನುವ ಬಗ್ಗೆಯೇ ಕಲ್ಪನೆ ಬದಲಾಗಿರುವುದರಿಂದ ಪ್ರತ್ಯೇಕವಾಗಿ ಹೇಳುತ್ತೇನೆ.

ಋತುಪರ್ಣ

Wednesday, November 11, 2009

Documentation: A Forgotten art


Harsha Rao shares a long forgotten secret with young journalists on how to overcome personal shortfalls like inexperience and poor memory, to produce best copies.


Celebrated writer Kushwant Singh had made it a habit of discouraging students who sought his advice on making a career in print journalism.

To the most determined student not discouraged by the talk on making a career in other fields, Kushwant Singh would finally give in advising the student to stack files in the order A to Z and then fill them up with articles of interest. For instance the file ‘A’ can have articles of interest on agriculture or aviation or about animals.

The compiling of articles in a manner that can be retrieved easily, is now a forgotten art. Once religiously followed by journalists of eminence, the documentation exercise has not been accorded the same priority by technology-savvy journalists. The exercise is disregarded, because its stellar role is hardly vouched in the class-room teaching.

Just as public memory is short, a journalist’s memory too is nothing to rave about (journalists like Manohar Prasad from Mangalore are an exception). It is this short memory, of journalists particularly, that emboldens politicians and elements on the wrong side of the law to get away with their tactless actions.

Lack of documentation lets milestones pass away, like it happened with Bantwal taluk in Mangalore whose 50th year went unnoticed. I have always held a belief that lack of documentation is sort of a betrayal to readers longing to stay connected with the past, in order to correct the faults of tomorrow.

I begun documentation right from the word go. I have clippings of every report, filed during my internship with The Hindu in Bangalore. I have a copy of my first ever by-line, published in Star of Mysore. After 13 years of Journalism, I nearly have 90 per cent of my by-line stories published in Morning News and The New Indian Express.

Based on my personal experience, let me vouch that I am reaping the benefits of my decade-long labour of love. I never considered myself as the best scoop-reporter or investigative reporter. But, my collection of articles has made me the best follow-up specialist reporter.

The documentation exercise in fact covers the many shortcomings in a reporter. Some Journalists stock articles digitally in the computers. Even I too had done it, assuming that one must change with time. But with the updating of software, I lost all my articles with it.

Thus East or West, physical compiling of articles is still the best and safest mode. A little time invested today not only saves a lot of trouble but also lets the conscience rest easy with a feeling that the readers have got more than what they had bargained for.

Tuesday, November 10, 2009

ಪ್ರಶ್ನೆ ಕೇಳಿ-ಉತ್ತರ ಪಡೆಯಿರಿ

ಸಂವಾದ ಶುರುವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ನೆಲೆಯ ಮಾಹಿತಿ, ಜ್ಞಾನ ನೀಡಬೇಕೆಂದೇ ಈ ಬ್ಲಾಗ್ ಆರಂಭಿಸಿದ್ದು ನಿಮಗೆ ತಿಳಿದದ್ದೇ. ಈಗ ಪ್ರಶ್ನೆ-ಉತ್ತರ ಅಂಕಣ ಆರಂಭವಾಗಿದೆ.

ನೀವು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು. ವೈಯಕ್ತಿಕವಾಗಿ ಪ್ರಶ್ನೆಗಳಿದ್ದರೆ (ಅಂದರೆ ಯಾರಾದರೂ ಬಗ್ಗೆ) ಅವುಗಳಿಗೆ ಉತ್ತರಿಸುವುದಿಲ್ಲ. ಆದರೆ ಪತ್ರಿಕಾ ಮನೆಗಳಲ್ಲಿ, ಟಿವಿ ಕಚೇರಿಗಳಲ್ಲಿ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ, ಎದುರಾಗುವ ಸವಾಲುಗಳು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಪ್ರಶ್ನೆ ಕೇಳಬಹುದು.

ಪ್ರಶ್ನೆ ಕೇಳುವವರು ತಮ್ಮ ಹೆಸರು, ಕಾಲೇಜಿನ ಹೆಸರನ್ನು ಸ್ಪಷ್ಟವಾಗಿ ಹೇಳಲೇಬೇಕು. ನಿಮ್ಮ ಪ್ರಶ್ನೆಗಳಿಗೆ ಆಯಾ ಕ್ಷೇತ್ರದ ನುರಿತರೇ ಉತ್ತರಿಸುವರು. ನಮ್ಮದೇ ಆದ ತಂಡವೊಂದಿದ್ದು, ಅದು ನಿಮ್ಮ ಅನುಮಾನಗಳನ್ನು ಬಗೆಹರಿಸಲಿದೆ.

ನಿಮ್ಮ ಪ್ರಶ್ನೆಗಳನ್ನು fivewoneh2009@gmail.com ಗೆ ಕಳುಹಿಸಬಹುದು.

Monday, November 9, 2009

ಪತ್ರಕರ್ತರಿಗೆ ತಾಳ್ಮೆ ಒಂದಿದ್ದರೆ...!


ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಸುಶಾಂತ್ ಬರೆದಿರುವ ಲೇಖನವಿದು. ಪತ್ರಕರ್ತರಿಗೂ ತಾಳ್ಮೆ ಇದ್ದರೆ ಚೆನ್ನ ಎನ್ನುತ್ತಾರೆ...!

ತ್ರಕರ್ತರ ಬಗ್ಗೆ ನಮ್ಮ ಕನ್ನಡ ಮಾಸ್ತರ್ ಸದಾ ಹೇಳುತ್ತಿದ್ದ ಮಾತೊಂದದು-ಪತ್ರಕರ್ತರಿಗೆ ತಾಳ್ಮೆಯೇ ಇಲ್ಲ. ಆ ... ಅವರನ್ನೇ ನೋಡು, ಈ ಇವರನ್ನೇ ನೋಡು. ಪತ್ರಕರ್ತನಾದ ಯಾರನ್ನೇ ನೋಡು. ಅವರ‍್ಯಾರಲ್ಲೂ ತಾಳ್ಮೆ ಎಂಬುದೇ ಇರದು’ ಎಂದು ತಮ್ಮ ತಾಳ್ಮೆ ಕಳಕೊಳ್ಳದೆ ಆರಾಮವಾಗಿ ಹೇಳುತ್ತಿದ್ದರು.

ಪತ್ರಕರ್ತರ ಬಗ್ಗೆ ಇಂಥ ಮಾತು ಹೊಸತಲ್ಲ. ನಮ್ಮಲ್ಲಿ ಬಹುತೇಕರು ಉದ್ಯಮಕ್ಕೆ ಅಗತ್ಯವಾದ ತಾಳ್ಮೆ ಎಂಬ ವಿಟಮಿನ್ ಕೊರತೆಯಿಂದ ಬಳಲುತ್ತಾರೆ. ಮತ್ತೂ ಕೆಲವರು ತಾಳ್ಮೆ ಎನ್ನುವುದು ನಿಧಾನ ಎಂಬ ಪದದ ಮತ್ತೊಂದು ಅರ್ಥ ಎಂದು ತಿಳಿದು ತಾಳ್ಮೆ ಇರದಿರುವುದೇ ತಮ್ಮ ಅರ್ಹತೆ ಎಂದುಕೊಳ್ಳುತ್ತಾರೆ.

ಯಾವುದಾದರೂ ಒಂದು ಕಾರ‍್ಯಕ್ರಮದಲ್ಲಿ ಗಮನಿಸಿ. ವೇದಿಕೆಯಲ್ಲಿ ಏನೇ ನಡೆಯುತ್ತಿರಲಿ, ಹೆಚ್ಚಿನವರು ತಮ್ಮ ವೃತ್ತಿ ಬಾಂಧವರ ಜತೆ ಮಾತನಾಡುತ್ತ, ನಗೆ ಚಟಾಕಿ ಹಾರಿಸುತ್ತಾ ಇರುತ್ತಾರೆ. ಕೆಲವರು ಆಗಾಗ್ಗೆ ಮೊಬೈಲು ಹಿಡಿದು ಹೊರಗೆ ಹೋಗಿ ಬರುವುದನ್ನು ಮಾಡುತ್ತಿರುತ್ತಾರೆ.

ಕಾರ‍್ಯಕ್ರಮಗಳಲ್ಲಷ್ಟೇ ಅಲ್ಲ, ಉಳಿದ ಕೆಲವೆಡೆಯೂ ಹಾಗೆಯೇ. ಅವರಿಗೆ ಒಂದು ವಿಷಯದ ಬಗ್ಗೆ ಅಧ್ಯಯನ ನಡೆಸಲು ಪುರುಸೊತ್ತಿಲ್ಲ. ಹಾಗಾಗಿಯೇ ಮನ್ನಾಡೇಯಂಥವರು ಪತ್ರಕರ್ತರನ್ನು ಒಂದೈದು ಗಜ ದೂರ ಇಡುತ್ತಿದ್ದರು. ಸಂದರ್ಶನಕ್ಕೆಂದು ಬರುವವರು ಸಂಗೀತದ ಬಗ್ಗೆ, ಹಾಡುಗಳ ಬಗ್ಗೆ ಸರಿಯಾಗಿ ಅರಿತಿರುವುದಿಲ್ಲ ಎಂಬುದೂ ಅವರ ದೂರು. ಎಚ್.ವೈ. ಶಾರದಾ ಪ್ರಸಾದರೂ ವಿಜಯ ಕರ್ನಾಟಕಕ್ಕೆ ಅಂಕಣ ಬರೆಯಲು ಒಪ್ಪಿಕೊಂಡದ್ದು ಸ್ವತಃ ತಾವೇ ಅನುವಾದ ಮಾಡುವುದಾಗಿ ಹೇಳಿದ ಮೇಲೆಯೇ ಎಂದು ವಿಶ್ವೇಶ್ವರ ಭಟ್ಟರೇ ಕಾಲ-ದೇಶದ ಮುನ್ನುಡಿಯಲ್ಲಿ ದಾಖಲಿಸಿದ್ದಾರೆ.

ಸುದ್ದಿ ವಾಹಿನಿಗಳ ಪತ್ರಕರ್ತರೂ ಹೀಗೆಯೇ. ಕ್ಷಣ ಕ್ಷಣದ ಮಾಹಿತಿಗಾಗಿ ಅವರು ಸಂಪರ್ಕಿಸುವ ವರದಿಗಾರರ ಮಾತನ್ನು ಒಮ್ಮೆ ಗಮನಿಸಿ. ವಾರ್ತಾ ವಾಚಕ ಪ್ರಸ್ತುತ ವಿದ್ಯಮಾನದ ಬಗ್ಗೆ ಒಂದಷ್ಟು ವಿಚಾರ ಪ್ರಸ್ತಾಪಿಸಿ ನಂತರದ ಬೆಳವಣಿಗೆಗಾಗಿ ವರದಿಗಾರನನ್ನು ಸಂಪರ್ಕಿಸುತ್ತಾನೆ. ಆದರೆ ಅದನ್ನು ಸರಿಯಾಗಿ ಕೇಳಿಕೊಳ್ಳದ ವರದಿಗಾರ ಪುನಾ ಅದೇ ಪೀಠಿಕೆ ಹಾಕುತ್ತಾನೆ. ಮತ್ತು ಅನಗತ್ಯವಾಗಿ ಇದು, ಇಂಥಾದ್ದು, ಈ ಒಂದು, ಈ ವಿಷಯ ಏನಿದೆಎಂಬ ಶಬ್ದಗಳನ್ನು ಪುನರುಚ್ಚರಿಸುತ್ತಿರುತ್ತಾನೆ.

ಸುದ್ದಿವಾಹಿನಿಗಳ ಇಂಥ ತಾಳ್ಮೆರಹಿತ ಗಡಿಬಿಡಿಯ ನಡುವೆ ನೋಡುಗರಾದ ನಾವು ಸುದ್ದಿ ಗ್ರಹಿಸಲು ತಡಬಡಾಯಿಸಬೇಕು. ಪತ್ರಿಕೆ ಎನ್ನುವುದು ಅವಸರದ ಸಾಹಿತ್ಯ, ಒಪ್ಪಿಕೊಳ್ಳಲೇ ಬೇಕು. ಆದರೆ ಅದನ್ನು ಓದುಗ ಅಥವಾ ನೋಡುಗರಿಗೆ ತಲುಪಿಸೋ ಮೊದಲು ಒಂದಷ್ಟು ಸಿದ್ಧ್ದತೆ ಮಾಡಿಕೊಳ್ಳುವ ತಾಳ್ಮೆ ಬೇಡವೇ? ತಕ್ಷಣಕ್ಕಾದರೂ ಅದಕ್ಕೆ ಒಂದಷ್ಟು ಪಾಲಿಷ್ ಹಾಕಬೇಕಲ್ಲವೇ? ಈ ತಾಳ್ಮೆ ಎಂಬ ವಿಟಮಿನಿನ ಕೊರತೆಯಿಂದಾಗಿ ಇಂದು ಸುದ್ದಿಗಳಿಗೆ ಬರವಿಲ್ಲ. ಆದರೆ ಯಾವುದರಲ್ಲೂ ಪರಿಪೂರ್ಣತೆ ಇಲ್ಲ.

ಇಂಥ ಕಾರಣಕ್ಕಾಗಿಯೇ ಬಹಳಷ್ಟು ಪತ್ರಕರ್ತರು ಹಣಕಾಸು, ಷೇರುಪೇಟೆ, ಪರ‍್ಯಾಯ ಇಂಧನ, ಇತ್ಯಾದಿ ಗಂಭೀರ ವಿಷಯಗಳ ಕುರಿತು ನಿಖರವಾಗಿ ಬರೆಯಲಾರರು. ಹೌದು. ಪತ್ರಕರ್ತರಲ್ಲಿ ಜಾಣತನವಿದೆ, ವೇಗವಿದೆ, ಚಾಕಚಕ್ಯತೆ ಇದೆ. ಆದರೆ ಕೊರತೆ ಮಾತ್ರ ಹಿಡಿ ತಾಳ್ಮೆ.

Friday, November 6, 2009

ಪತ್ರಕರ್ತರ ಸಾಕ್ಷಿಪ್ರಜ್ಞೆ: ಪಿ ಸಾಯಿನಾಥ್


ವಿಜಯ್ ಜೋಶಿ ಧರ್ಮಸ್ಥಳದ ಉಜಿರೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಿ. ಸಾಯಿನಾಥರನ್ನು ಕುರಿತ ಅವರ ಲೇಖನವನ್ನು ಓದಿ, ಅಭಿಪ್ರಾಯಿಸಿ.

ಪತ್ರಕರ್ತ ಪಿ ಸಾಯಿನಾಥ್ ಒಮ್ಮೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಫೆಲೋಶಿಪ್‌ಗಾಗಿ ಅರ್ಜಿ ಹಾಕಿದ್ದರು. ಅದರ ಸಂದರ್ಶನಕ್ಕಾಗಿ ಕರೆಯೂ ಬಂತು. ಟೈಮ್ಸ್ ಪತ್ರಿಕೆಯ ಸಂಪಾದಕರುಗಳ ಮುಂದೆ ಕುಳಿತು ತನಗೆ ಫೆಲೋಶಿಪ್ ಸಿಕ್ಕರೆ ಏನೇನು ಮಾಡುತ್ತೇನೆ ಎಂಬುದನ್ನು ಸವಿವರವಾಗಿ ಹೇಳುತ್ತಿದ್ದರು.

ಇಂದಿನ ಪತ್ರಿಕೆಗಳು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲ್ಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಮಾತ್ರ ಬರೆಯುತ್ತಿವೆ, ನಾನು ಈ ದೇಶದ ಸಾಮಾಜಿಕ ವ್ಯವಸ್ಥೆಯ ಕೆಳಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಬರೆಯುತ್ತೇನೆ ಎಂದು ಅದಾಗಲೇ ತೀರ್ಮಾನಿಸಿದ್ದ ಪಿ ಸಾಯಿನಾಥ್ ಟೈಮ್ಸ್ ಧಣಿಗಳ ಮುಂದೆಯೂ ತಮಗಿರುವ ಗ್ರಾಮೀಣ ವರದಿಗಾರಿಕೆಯಲ್ಲಿನ ಆಸಕ್ತಿಯ ಕುರಿತು ಹೇಳಿದರು. ಆಗ ಟೈಮ್ಸ್‌ನ ಸಂಪಾದಕ ಮಹಾಶಯನೊಬ್ಬ ನಮ್ಮ ಪತ್ರಿಕೆಯ ಓದುಗರಿಗೆ ನೀವು ಬರೆಯುವ ಗ್ರಾಮೀಣ ವರದಿಯ ಬಗ್ಗೆ ಏನೂ ಆಸಕ್ತಿ ಇಲ್ಲ, ಏನು ಮಾಡ್ತೀರಾ ಎಂದು ಕೇಳಿದ.

ಓದುಗರಿಗೆ ಏನು ಬೇಕು, ಏನು ಬೇಡ ಎಂದು ಹೇಳಲು ನೀವು ನಿಮ್ಮ ಓದುಗರನ್ನು ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ? ಎಂದು ಕೂಡಲೇ ಮರುಪ್ರಶ್ನಿಸಿದರು ಸಾಯಿನಾಥ್. ಸಾಯಿನಾಥ್ ಪ್ರಶ್ನೆ ಅದೆಷ್ಟು ತೀಕ್ಷ್ಣವಾಗಿತ್ತೆಂದರೆ ಅವರಿಗೆ ಸಂದರ್ಶನಕಾರರಿಂದ ತಿರುಗಿ ಪ್ರಶ್ನೆಯೇ ಬರಲಿಲ್ಲ. ಅದಲ್ಲದೆ ಅವರಿಗೆ ಟೈಮ್ಸ್‌ನ ಫೆಲೋಶಿಪ್ ಕೂಡ ದೊರೆಯಿತು.

ಪೇಜ್ ತ್ರಿ ಪತ್ರಿಕೋದ್ಯಮಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಆರೋಪಕ್ಕೆ ಈಡಾಗಿರುವ ಟೈಮ್ಸ್‌ನ ಧಣಿಗಳ ಮುಂದೆ ಕುಳಿತು ಅವರ ಬಾಯಿ ಮುಚ್ಚಿಸುವುದು ಬಹುಷಃ ಸಾಯಿನಾಥ್‌ಗೆ ಮಾತ್ರ ಸಾಧ್ಯವೇನೋ. ಸಿಂಹದ ಗುಹೆಗೆ ಹೋಗಿ ಅಲ್ಲಿಯೇ ಅದನ್ನು ಸೋಲಿಸುವುದೆಂದರೆ ಸಾಮಾನ್ಯದ ಮಾತೇ?

ಅಂಥ ಪತ್ರಕರ್ತ, ದಿ ಹಿಂದೂ ಪತ್ರಿಕೆಯ ಗ್ರಾಮೀಣ ವರದಿಗಾರ ಪಿ ಸಾಯಿನಾಥ್ ಯಾವತ್ತಿಗೂ ನನ್ನ ಪಾಲಿನ ಆದರ್ಶ.

ಟೈಮ್ಸ್‌ನ ಫೆಲೋಶಿಪ್ ಸಿಕ್ಕಿದ್ದೇ ತಡ ಸಾಯಿನಾಥ್ ದೇಶದ ಬಡ ಜಿಲ್ಲೆಗಳ ಹಾದಿ ಹಿಡಿದರು. ದೇಶದ ಐದು ರಾಜ್ಯಗಳ ಹತ್ತು ಬಡ ಜಿಲ್ಲೆಗಳನ್ನು ತಿರುಗಿದರು. ಈ ತಿರುಗಾಟದಲ್ಲಿ ಅವರು ಸುಮಾರು ಒಂದು ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು. ಅದ್ದರಲ್ಲೂ ಐದು ಸಾವಿರ ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಿದ್ದರು! ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆಯೇ ಸಾಯಿನಾಥ್ ಅವರ ಒಟ್ಟೂ 84 ಗ್ರಾಮೀಣ ವರದಿಗಳನ್ನು 18 ತಿಂಗಳ ಅವಧಿಯಲ್ಲಿ ಪ್ರಕಟಿಸಿತು. ಮುಂದೆ ಆ ಲೇಖನಗಳೆಲ್ಲ ಒಟ್ಟಾಗಿ Everyone Loves A Good Drought ಎಂಬ ಹೆಸರಿನಲ್ಲಿ ಪುಸ್ತಕವಾಗಿ ಬಂತು. ಆ ಪುಸ್ತಕ ಇಂದಿಗೂ ಗ್ರಾಮೀಣ ವರದಿಗಾರಿಕೆಯ ಬಗ್ಗೆ ಆಸಕ್ತಿಯಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಪಾಲಿಗೆ ಭಗವದ್ಗೀತೆಯಿದ್ದಂತೆ.

ಕೆಲ ಕನ್ನಡ ಟಿವಿ ವಾರ್ತಾ ವಾಹಿನಿಗಳನ್ನು ನೋಡಿಕೊಂಡು ಈ ಪತ್ರಕರ್ತರೆಲ್ಲ ಹೀಗೇ ಎಂದು ಮೂದಲಿಸುವ ಎಡಬಿಡಂಗಿಗಳಿಗೆ ಮತ್ತು ಕೆಲ ಕರಿ ಬಣ್ಣದ ಕನ್ನಡ ಟ್ಯಾಬ್ಲಾಯ್ಡ್‌ಗಳನ್ನು ಓದಿಕೊಂಡು ಪತ್ರಿಕೋದ್ಯಮ ಎಂದರೆ ಇಷ್ಟೇ ಎಂದು ಉಡಾಫೆಯಲ್ಲಿ ಮಾತನಾಡುವ ಅತಿಬುದ್ಧಿವಂತರಿಗೆ ಪತ್ರಿಕೋದ್ಯಮದ ಬಗ್ಗೆ ಅಭಿಮಾನ ಇರುವವರು ಹೆಮ್ಮೆಯಿಂದ ಕೇಳಬೇಕಾದ ಪ್ರಶ್ನೆ ಎಂದರೆ: ಸ್ವಾಮಿ, ನೀವು ಸಾಯಿನಾಥ್‌ರ ವರದಿಗಳನ್ನು ಓದಿದ್ದೀರಾ?.

ಸಾಯಿನಾಥ್‌ರ Everyone Loves A Good Drought ಪುಸ್ತಕ ಬಿಡುಗಡೆಯಾಗಿ ಎರಡು ವರ್ಷಗಳ ಕಾಲ ಟಾಪ್ ಟೆನ್ ಪುಸ್ತಗಳ ಸಾಲಿನಲ್ಲಿ ನಂಬರ್ ೧ ಆಗಿತ್ತು! ಅದಲ್ಲದೆ ನಂತರ ಖ್ಯಾತ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾದವರ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳ ಸಾಲಿನಲ್ಲಿ ಅದು ಒಂದಾಗಿದೆ! ಅಷ್ಟೊಂದು ದೊಡ್ಡಮಟ್ಟದ ಮಾರಾಟ ಕಂಡ ಆ ಪುಸ್ತಕದ ರಾಯಲ್ಟಿಯ ಅಷ್ಟೂ ಹಣವನ್ನು ಸಾಯಿನಾಥ್ ಯುವ ಗ್ರಾಮೀಣ ವರದಿಗಾರರನ್ನು ಪ್ರೋತ್ಸಾಹಿಸಲು ವಿನಿಯೋಗಿಸಿದರು!! ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ೨೦೦೭ನೆಯ ಇಸವಿಯ ಮ್ಯಾಗ್ಸೆಸೇ ಪ್ರಶಸ್ತಿ ಸಾಯಿನಾಥ್‌ರನ್ನು ಅರಸಿಕೊಂಡು ಬಂತು.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ರೈತರ ಆತ್ಮಹತ್ಯೆಗಳ ಬಗ್ಗೆ ಅವರು ಬರೆದ ಲೇಖನ ಮಾಲೆ ಪ್ರಧಾನಿ ಮನಮೋಹನ್ ಸಿಂಗ್ ವಿದರ್ಭಕ್ಕೆ ಧಾವಿಸಿ ಬರುವಂತೆ ಮಾಡಿತು. ಅಲ್ಲದೆ, ವಿದರ್ಭ ಪ್ರಾಂತ್ಯದ ರೈತರ ಕಲ್ಯಾಣಕ್ಕೆಂದೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಡಿತು. ಪತ್ರಕರ್ತನ ಬರಹಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ ಎಂದು ಆರೋಪಿಸುವವರಿಗೆ ಮತ್ತು ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ತಾಕತ್ತನ್ನು ಪತ್ರಿಕೋದ್ಯಮ ಕಳೆದುಕೊಂಡಿದೆ ಎಂದು ಮಾತಾಡುವವರಿಗೆ ಉತ್ತರದಂತೆ ವಿದರ್ಭ ಘಟನೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.

ಇರಲಿ, ಸಾಯಿನಾಥ್‌ರ ಸಾಧನೆಗಳು ಸಾಕಷ್ಟು ದೊಡ್ಡದಿದೆ.

ಸಾಯಿನಾಥ್‌ರಂತಹ ಪತ್ರಕರ್ತರು ಯಾವ ಪತ್ರಿಕೆಯಲ್ಲಿದ್ದರೂ ಅವರ ಇರುವಿಕೆಯೇ ಪತ್ರಿಕೋದ್ಯಮಕ್ಕೊಂದು ಹೆಮ್ಮೆ. ಅವರು ಕೇವಲ ತಾವು ಮಾತ್ರ ಬೆಳೆಯುವುದಿಲ್ಲ. ಇಡೀ ಜನ ಸಮೂಹವನ್ನು ಬೆಳೆಸುತ್ತಾರೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿಯೂ ತಾವು ನಂಬಿದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾ ನಮಗೆಲ್ಲ ಹೊಸ ನಾಡಿನ, ರಸದ ಬೀಡಿನ ಭರವಸೆ ನೀಡುವ ರೂಪಕವಾಗಿ ಕಾಣಿಸುತ್ತಾರೆ.

Wednesday, November 4, 2009

GIFT,Much ado about nothing?


Harsha Rao sheds light on gift culture...

TO take or not to take, is the dilemma before every student being initiated into the wonderful world of Journalism. Even after 13 years in this profession, I continue to encounter the dilemma on retaining or rejecting a `gift’.

When I took my first few steps on the firm tarmac of Journalism, I held a high moral ground on the issue of taking gifts. I confess, my decision was not my own and was influenced by Niranjan Vanalli’s handbook on the issue of accepting gifts. My internship in The Hindu under the watchful eyes of journalists with impeccable integrity like Anekere Jayram and Ramoo, strengthened my decision.

My internship experience in The Hindu could be comparable to the level of experience faced while Gandhiji experimented with truth. Will the gift weigh heavily on my conscience ? Will the gift choke my flow of thoughts ? Will the gift prompt me to violate the basic principles of Journalism ? Believe me or not, I had found my answers when my internship ended in The Hindu.

I remember extending my hand like a beggar and collecting a wrapped up gift once from a popular showroom on M G Road and another from an eye hospital somewhere near Lalbagh. I felt like a thief and did not muster courage to take the gift straightaway to the office in The Hindu. The memory of me sitting blank before the monitor unable to write a single sentence is still fresh in my mind.

A gift taken is like a bribe accepted and it weighed heavily on my conscience. Words struggled to escape from my mind and due to scarcity of computers I used to complete the piece close to midnight. Adding to my miseries, both the news items never appeared. I as a fledgling wordsmith was always fumbling for words, when organisers contacted me seeking explanation for reports that never appeared in The Hindu.
I also took cues from my senior Prasad, who only accepted files and notepads to escape jeers of being branded as a saint by those journos who accepted gifts. Let me tell you, rejecting gifts is always a wretched drill. `No please, thank you;’’ My polite denial always fell on deaf years and as next course of action I used to make a hasty exit, as if my tail was on fire, outsmarting even determined organisers hot on pursuit.

Initially I kept tabs on price of the gifts I had rejected. As a practising bachelor I was looking to buy a electric stove to cook rice. At the same time Konkan Railways had organised a press conference and gifted electric rice cookers to journos. As usual I had outrightly rejected the gift and when I learnt about its price I had fought hard the temptation to even repent over my decision.

That was the last time I kept tabs on the prices. Though I have taken a high moral on this issue, I had slipped on a couple of occasions. I took a t-shirt once concealed in a folder. Instead of returning it, I kept it. On another occasion, I took home MRPL’s gift-wrapped cashewnuts which was kept on my table in my absentia. Once I threw a tantrum after learning that an Ad agency kept a suitcase promising to deliver it to me.

I will not like to pass judgement on the many justifications that journalists rattle on the need to take gifts. I am aware that rejecting a gift will not fetch me Pulitzer award. But for me, the printed word is still sacred and within my limitation I will keep my conscience clean by saying not to gifts and et all.

Sunday, November 1, 2009

ಕ್ರೈಂ ರಿಪೋರ್ಟಿಂಗ್ ಎಂಬ ಅನಿರೀಕ್ಷೆಯ ನಿರೀಕ್ಷೆ!


ಅಪರಾಧ ಘಟನೆಗಳ ವರದಿಗಾರಿಕೆ ವರದಿಗಾರರಾದವರಿಗೆ ನಿಜಕ್ಕೂ ಸವಾಲು. ಆ ಕುರಿತು ಲೇಖನ ಸರಣಿ ಆರಂಭಿಸಿದ್ದಾರೆ ವಿನಾಯಕ ಭಟ್. ಮೊದಲ ಕಂತಿದು. ಓದಿ ಅಭಿಪ್ರಾಯ ಹೇಳಿ.


ಯಾರೂ ನಿಮ್ಮನ್ನು ಆಮಂತ್ರಣ ಕೊಟ್ಟು ಕರೆಯೋದಿಲ್ಲ. ವಾಹನ ಮಾಡಿಸಿಕೊಂಡು ಕರೆದುಕೊಂಡು ಹೋಗುವುದಿಲ್ಲ. ಚಹಾ-ತಿಂಡಿ ಕೊಡೋದಿಲ್ಲ. ಸುದ್ದಿ ಬರೆಯಲು ಅನುಕೂಲವಾಗುವಂತೆ ಪ್ರೆಸ್‌ನೋಟ್ ಕೂಡ ಕೊಡುವುದಿಲ್ಲ!

ಘಟನೆ ನಡೆದಿದ್ದನ್ನು ನೀವೇ ಗೊತ್ತು ಮಾಡಿಕೊಳ್ಳಬೇಕು. ನೀವೇ ಸ್ಥಳಕ್ಕೆ ಹೋಗಬೇಕು. ಮಾಹಿತಿಯನ್ನೂ ನೀವೇ ಸಂಗ್ರಹಿಸಿಕೊಳ್ಳಬೇಕು!!

ಅದು ಕ್ರೈಂ ರಿಪೋರ್ಟಿಂಗ್ ಅಲಿಯಾಸ್ ಅಪರಾಧ ವರದಿಗಾರಿಕೆ!!

ಹೌದು. ‘ಇಲ್ಲೊಂದು ಕೊಲೆಯಾಗಿದೆ ಅಥವಾ ಇಷ್ಟು ಹೊತ್ತಿಗೆ ಅಲ್ಲೊಂದು ಕೊಲೆ ನಡೆಯಲಿದೆ. ದಯವಿಟ್ಟು ನೀವು ನಿಮ್ಮ ವರದಿಗಾರನನ್ನು ಕಳುಹಿಸಿ’ ಎಂದು ಯಾರೂ, ಯಾವ ಪತ್ರಿಕಾ ಕಚೇರಿಗೂ ಆಮಂತ್ರಣ ಕಳುಹಿಸುವುದಿಲ್ಲ. ಇತರೆ ಕೆಲವು ಕಾರ್ಯಕ್ರಮಗಳಿಗೆ ವಾಹನ ಮಾಡಿಸಿಕೊಂಡು ಕರೆದುಕೊಂಡು ಹೋದಂತೆ ಯಾರೂ ನಿಮ್ಮನ್ನು ಅಪರಾಧ ಘಟಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗುವುದಿಲ್ಲ. ಸುದ್ದಿ ಬರೆಯಲು ಬೇಕಾದ ಪೆನ್ನು, ಪ್ಯಾಡು ಕೊಟ್ಟು, ಬರೆಯಬೇಕಾದ ವಿಷಯವನ್ನೂ ಮುದ್ರಿಸಿ ಕೊಡುವುದಿಲ್ಲ. ಬದಲಾಗಿ ಇದೆಲ್ಲವನ್ನೂ ನೀವೇ ಮಾಡಬೇಕು. ನಿಮ್ಮದೇ ಸಾಮರ್ಥ್ಯದಿಂದ ಮಾಡಬೇಕು.

ಹೀಗಿರುವಾಗ ಚಹಾ-ತಿಂಡಿ ಕೊಡುವುದು ದೂರದ ಮಾತು. ಎಷ್ಟೋ ಕಡೆ ನೀವು ಕನಿಷ್ಟ ಚಹಾ ಕುಡಿಯಲೂ ಆಗದ ಸ್ಥಿತಿ ಇರುತ್ತದೆ. ಯಾಕೆಂದರೆ ಸಾಮಾನ್ಯವಾಗಿ ಯಾವುದೇ ಅಪರಾಧ ನಡೆಯಲಿ ಅಲ್ಲಿನ ಸ್ಥಿತಿ ಸಾಮಾನ್ಯವಾಗಂತೂ ಇರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಆಸುಪಾಸಿನ ಅಂಗಡಿಗಳು ಘಟನೆ ನಡೆಯುತ್ತಿದ್ದಂತೆ ಬಾಗಿಲು ಮುಚ್ಚಿಬಿಟ್ಟಿರುತ್ತವೆ. ಹೀಗಾಗಿ ಕುಡಿಯಲು ನೀರೂ ಸಿಗದ ಸ್ಥಿತಿ!

ಇದೇ ಕ್ರೈ ವರದಿಗಾರಿಕೆ ಮಜಾ ಮತ್ತು ಕಷ್ಟ!

ಹೌದು. ಕ್ರೈಂ ವರದಿಗಾರಿಕೆಯಲ್ಲಿ ಮಜಾ ಕೂಡ ಇದೆ. ಅಷ್ಟೇ ಕಷ್ಟವೂ ಇದೆ. ಕ್ರೈಂ ವರದಿಗಾರಿಕೆ ಒಂದು ಸವಾಲು. ಈ ಸವಾಲು ಇಷ್ಟವಾದರೆ, ಅದನ್ನು ಎದುರಿಸಲು ನೀವು ಸಿದ್ಧರಿದ್ದರೆ ಯಾರು ಬೇಕಾದರೂ ಕ್ರೈಂ ವರದಿಗಾರರಾಗಬಹುದು. ಇಲ್ಲವಾದಲ್ಲಿ ಅದರ ಸುದ್ದಿಗೆ ಹೋಗದಿರುವುದೇ ಲೇಸು.

ಬರೀ ಸವಾಲು ಎದುರಿಸಲು ಸಿದ್ಧರಾದರೆ ಸಾಲದು. ಎಷ್ಟು ಹೊತ್ತಿಗೆ ಎಲ್ಲಿ, ಏನು ಬೇಕಾದರೂ ಅಗಿಬಿಡಬಹುದು. ಕ್ರೈಂ ರಿಪೋರ್ಟರ್ ಅಂದರೆ ಎಷ್ಟೇ ಹೊತ್ತಿನಲ್ಲಿ ಎದ್ದು ಹೊರಡಲು ಸಿದ್ಧನಾಗುವ ಸೈನಿಕನಂತಿರಬೇಕು. ಪುರುಸೊತ್ತಿರುವಷ್ಟು ಹೊತ್ತು ಪುರುಸೊತ್ತು. ಏನೂ ಕೆಲಸವಿಲ್ಲ ಅಂತ ಅಂದುಕೊಳ್ಳುತ್ತಿರುವ ಕ್ಷಣದಲ್ಲೇ ಎಲ್ಲೋ, ಏನೋ ಸಂಭವಿಸಿ ದಿನವಿಡೀ ಬಿಡುವಿಲ್ಲದ ಕೆಲಸ ಬಂದುಬಿಡಬಹುದು. ಹೀಗಾಗಿ ಕ್ರೈಂ ವರದಿಗಾರರಿಗೆ ಪುರುಸೊತ್ತೂ ಇಲ್ಲ, ಕೆಲಸವೂ ಇಲ್ಲ ಎಂಬ ಸ್ಥಿತಿ!

ಊಟ, ನಿದ್ರೆ ಹೀಗೆ ಯಾವುದಕ್ಕೂ ಹೊತ್ತು ಗೊತ್ತಿಲ್ಲ. ಬೆಂಗಳೂರಿನಂತಹ ಪ್ರದೇಶದಲ್ಲಿ ಶಿಫ್ಟ್ ಇರಬಹುದು. ಆದರೆ ಅದು ಬಿಟ್ಟು ಬೇರೆ ಪ್ರದೇಶದಲ್ಲಿ ಕ್ರೈಂಗೆಂದು ಪ್ರತ್ಯೇಕ ವರದಿಗಾರರು ಇರುವುದೇ ಅಪರೂಪ. ಹೀಗಿರುವಾಗ ಇನ್ನು ಶಿಫ್ಟ್ ಕನಸಿನ ಮಾತು. ಹೀಗಾಗಿ ಹೊತ್ತು ಗೊತ್ತಿಲ್ಲದ ಡ್ಯೂಟಿ. ಯಾಕೆಂದರೆ ಅಪರಾಧ ಎಸಗುವವರು ನಮ್ಮ ಅನುಕೂಲ ನೋಡಿ ಅಪರಾಧ ಎಸಗುವುದಿಲ್ಲ. ಬದಲಾಗಿ ಅವರ ಅನುಕೂಲ ನೋಡಿ ಅಪರಾಧ ಎಸಗುತ್ತಾರೆ. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ ಅದು ವರದಿಗಾರರಿಗೆ ಅನಾನುಕೂಲದ ಸಮಯವೇ ಆಗಿರುತ್ತದೆ!

ಅದಕ್ಕೇ ಕ್ರೈಂ ವರದಿಗಾರಿಕೆ ಎಂಬುದು ಅನಿರೀಕ್ಷೆಯ ನಿರೀಕ್ಷೆ!

Saturday, October 31, 2009

ಪತ್ರಿಕೋದ್ಯಮದ ಮೂಲಸ್ತಂಭಗಳು

ಏನು:
ಘಟಿಸಿದ ಘಟನೆ. ಒಂದೆರಡು ಸಾಲು, ಅಂದರೆ ಹತ್ತಾರು ಪದ. ಅದೇ ಪೀಠಿಕೆಗೆ ಬೆನ್ನು ಮೂಳೆ ಇದ್ದ ಹಾಗೆ.

ಎಲ್ಲಿ:
ಆ ಘಟನೆ ನಡೆದ ಸ್ಥಳ, ಪ್ರದೇಶ, ಬ್ರಹ್ಮಾಂಡದಲ್ಲಿ ಎಲ್ಲಿಯಾದರೂ ಸರಿಯೇ ಅದನ್ನು ನಮೂದಿಸಬೇಕು.

ಯಾವಾಗ :
ಈ ಸಂಬಂಧಿಸಿದ ಘಟಿತ ಅಥವಾ ಉಂಟಾದ ಘಟನೆ, ಸಂಗತಿ, ಸುದ್ದಿ, ವದಂತಿ, ವಾರ್ತೆ, ವಿಷಯ ಉಂಟಾದುದು ಎಂದು ? ಯಾವ ದಿನ, ಯಾವ ಕ್ಷಣ, ಎನ್ನುವುದು. ಇದಿಲ್ಲದಿದ್ದರೆ ಲಯ ತಪ್ಪಿದಂತೆಯೇ.
ಏಕೆ :
ಈ ಏನು ‘ಎನ್ನುವುದು’ ‘ಎಲ್ಲಿ’ಯಾದರೂ ಉಂಟಾಗಿರಲಿ, ಅದು ಏಕೆ ಎಂಬುದನ್ನು ತಿಳಿಸಬೇಕು. ಕಾರಣಕ್ಕೆ ಒಂದು ಕಾರಣ ಇರಬೇಕು.

ಯಾರಿಂದ:
ಏನಾದರೂ ಎಲ್ಲಿಯಾದರೂ ಯಾವಾಗಲಾದರೂ ಏನೋ ಉಂಟಾಗಿರಲಿ. ಅದು ಯಾರಿಂದ, ಯಾವುದರಿಂದ ಎಂಬುದನ್ನು ಸ್ಪಷ್ಟಪಡಿಸುವುದು. ಅದು ವ್ಯಕ್ತಿ, ವಸ್ತು, ಸಂಸ್ಥೆ, ಸಂಘಟನೆ, ಅನಾಮಧೇಯ, ನಾಮಧೇಯ, ನಿಗೂಢ, ಪರಿಚಿತ, ಅಪರಿಚಿತರಿಂದ ಕೇಳಿ ಬಂದರೆ, ತಿಳಿದು ಬಂದರೆ ಸೂಕ್ತ.

ಹೇಗೆ :
ಇವೆಲ್ಲವೂ ಆಗಿದ್ದು ಹೇಗೆ ? ಎಂಬುದನ್ನು ತಿಳಿಸುವುದೇ ಮೂಲ ಕುತೂಹಲ ತಣಿಸುವ ಕಾರ‍್ಯ. ಘಟಿಸಿದುದು ‘ಹೇಗೆ" ಎಂಬುದನ್ನು ವಿವರಿಸುವುದು ಅತ್ಯಂತ ಅವಶ್ಯ.

ಇದು ನಮ್ಮ ಪತ್ರಿಕೋದ್ಯಮದ ಮೂಲ ತತ್ವಗಳು. ಇವೆಲ್ಲವುಗಳ ಬಳಕೆಯ ಮಾದರಿ ಇಂದು ಹಿಂದೆ ಮುಂದೆ ಆಗಿರಬಹುದು. ಆದರೆ ಅವುಗಳನ್ನು ಬಿಟ್ಟಂತೂ ಸುದ್ದಿಯ ಕಟ್ಟಡ ಕಟ್ಟಲಾಗುವುದಿಲ್ಲ. ಒಂದುವೇಳೆ ಕಟ್ಟಿದರೂ ಎನ್ನಿ, ಅದು ಅಪೂರ್ಣವೇ.

Friday, October 30, 2009

ಸಂವಾದಕ್ಕೆ ಆಹ್ವಾನ

ಗೆಳೆಯರೇ,
ಪತ್ರಿಕೋದ್ಯಮ ನಮ್ಮ (ಮನುಷ್ಯನ) ಆವಿಷ್ಕಾರಗಳಲ್ಲಿ ಮಹತ್ವದ್ದು. ತನ್ನ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿಯೇ ನಮ್ಮ ಚಲನಶೀಲತೆಯನ್ನು ಪ್ರತಿನಿಧಿಸಬಲ್ಲದು. ಅಂಥದೊಂದು ಅಗತ್ಯತೆಯನ್ನು ಕಂಡುಕೊಂಡು ಆ ನೆಲೆಯಲ್ಲಿ ನಾವು ಹತ್ತು ಹಲವಾರು ಸುಧಾರಣೆಗಳನ್ನು ಮಾಡಿಕೊಳ್ಳುತ್ತಾ ಸಾಗಿದ್ದೇವೆ.

ಇಂದು ಮಾಧ್ಯಮ ಹತ್ತಾರು ದೃಷ್ಟಿಕೋನಗಳಲ್ಲಿ ರೂಪುಗೊಳ್ಳುತ್ತಾ ಬೆಳೆಯುತ್ತಿದೆ. ಪರಿಸರದಲ್ಲಾಗುವ ಬದಲಾವಣೆಗಳೆಲ್ಲಾ ಇದರ ಮೇಲೂ ಪರಿಣಾಮ ಬೀರಿದೆ. ಅದನ್ನೆಲ್ಲಾ ನೀಗಿಸಿಕೊಂಡು ಬಹಳ ವಿಸ್ತೃತವಾಗಿ ಮಾಧ್ಯಮ ಬೆಳೆಯುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ-ಸುಧಾರಣೆ ಅತೀವವಾದದ್ದು. ಹತ್ತು ವರ್ಷಗಳ ಹಿಂದಿನ ಸುದ್ದಿಮನೆಯ ಚಿತ್ರಣವೇ ಇಂದು ಬದಲಾಗಿ ಹೋಗಿದೆ.

ತಂತ್ರಜ್ಞರಂತೆಯೇ “ಸ್ಟಿಫ್’ ಆಗಿ ಕಾಣುವ ಸುದ್ದಿಯ ಮನೆಯೊಳಗಿನವರು ಬಹಳ ನಾಜೂಕುತನ ರೂಢಿಸಿಕೊಂಡಿದ್ದಾರೆ. ಕಾರ್‍ಯ ಶೈಲಿಯಲ್ಲೂ ಹೊಸತನ ಬಂದಿದೆ. ಪತ್ರಿಕೋದ್ಯಮ ನಿಂತ ನೀರಾಗದೇ ಹರಿಯುವ ನದಿಯಾಗುವತ್ತ ಸಾಗಿದೆ. ತಂತ್ರಜ್ಞಾನ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ತಂದಿರುವ ಬದಲಾವಣೆಗಳು ಅಪಾರ. ಆದರೆ ಅದು ಮಾಧ್ಯಮ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಆಗಿದೆ. ಮಾಧ್ಯಮ ಬೆಳೆದಿರುವ ರೀತಿಯೂ ಅಗಾಧ. ಭಾರತೀಯ ಪತ್ರಿಕೋದ್ಯಮದಂತೆಯೇ ನಮ್ಮ ಕನ್ನಡ ಪತ್ರಿಕೋದ್ಯಮದಲ್ಲೂ ಒಂದಿಷ್ಟು ಬದಲಾವಣೆಗಳಾಗಿವೆ.

ಉದಾರೀಕರಣ, ಜಾಗತೀಕರಣದ ಗಾಳಿಯಿಂದ ಪಲ್ಲಟದ ಅಲೆಗಳು ಎದ್ದಿರುವುದು ನಿಜ. ಸಹಜವಾಗಿ ನಡೆದುಹೋಗುತ್ತಿದ್ದವ ಇದ್ದಕ್ಕಿದ್ದಂತೆ ಎದುರಾಗುವ ವೃತ್ತದಲ್ಲಿನ ಗೊಂದಲವನ್ನು ನಮ್ಮ ಮಾಧ್ಯಮ ಕ್ಷೇತ್ರವೂ ಎದುರಿಸುತ್ತಿದೆ ; ಪತ್ರಕರ್ತರೂ ಸಹ. ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮದ ನಡುವಿನ ಪೈಪೋಟಿ ಸಹ ಹೆಚ್ಚಿದೆ. ಹಿಂದಿಗಿಂತಲೂ ಈಗ ಪತ್ರಕರ್ತರು ಹೆಚ್ಚು “ಬ್ಯುಸಿ’ಯಾಗಿದ್ದಾರೆ. ಬ್ರೇಕಿಂಗ್ ನ್ಯೂಸ್‌ನತ್ತ ಗಮನ ನೆಟ್ಟಿದ್ದಾರೆ.

ಸೆನ್ಸೇಷನ್ ಜರ್ನಲಿಸಂನಂಥ ಅಪವಾದ ಬರುತ್ತಿರುವುದೂ ನಿಜ. ಸುದ್ದಿಯ ನೆಲೆಯಲ್ಲಿ ಇದ್ದ ವ್ಯತ್ಯಾಸ ದೂರವಾಗುತ್ತಿದೆಯೇನೋ? ಮಾಧ್ಯಮಗಳು ನಮ್ಮ ಬದುಕಿಗೆ ಸಂವಾದವಾಗಿ ಪರಿಣಮಿಸುತ್ತಿಲ್ಲವೇನೋ? ಸುದ್ದಿಯ ವೈಭವೀಕರಣದತ್ತ ಮಾಧ್ಯಮಗಳು ಹೊರಟಿವೆಯೇ? ಇಂಥ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಇದೆಲ್ಲದರ ಮಧ್ಯೆ ಈ “ಸಂವಾದ’ ಆರಂಭಿಸಿದ್ದೇನೆ.

ನನ್ನ ಉದ್ದೇಶ ಯಾವುದೇ ವಿವಾದವನ್ನು ಹುಟ್ಟು ಹಾಕುವುದಲ್ಲ. ನಮ್ಮ ಕ್ಷೇತ್ರದ ಬಹಳಷ್ಟು ಬದಲಾವಣೆಗಳು, ಕ್ಷೇತ್ರದ ಒಳ-ಹೊರಗುಗಳು ಬಹಳಷ್ಟು ಮಂದಿಗೆ ತಿಳಿದೇ ಇರುವುದಿಲ್ಲ. ನಮ್ಮ ಕಾರ್‍ಯ ಕ್ಷೇತ್ರದಲ್ಲಿನ ಒತ್ತಡ, ಡೆಡ್‌ಲೈನ್ ಮುಟ್ಟಲು ಪಡುವ ಶ್ರಮ-ಎಲ್ಲವೂ ಅಪೂರ್ವ. ನಾನು ಈ ಕ್ಷೇತ್ರವನ್ನು ಬಯಸಿಯೇ ಬಂದಿದ್ದು. ನನ್ನ ಅನಿಸಿಕೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ದುಡಿಯುವುದು ನಮಗೆ ಅನಿವಾರ್ಯವೆನಿಸಿದರೆ ಅದು ಜೀತವೆನಿಸದು. ಒಂದು ನಿರ್ದಿಷ್ಟ ನಿಯಮಗಳಡಿ ಸೀಮಿತತೆಯ ವ್ಯಾಪ್ತಿ ಅರಿತು ಕಾರ್‍ಯ ಮಾಡುವುದು ನನ್ನ ದೃಷ್ಟಿ. ಅದರೊಳಗೆ ನನಗೆ ಇಷ್ಟವಾಗುವ ಸೃಷ್ಟಿ ಸಾಧ್ಯವೇ ಎಂದು ಪ್ರಯತ್ನಿಸುತ್ತೇನೆ, ಅಷ್ಟೇ. ನಾನು ಸದಾ ಪ್ರಯತ್ನದಲ್ಲಿ ಮಾತ್ರ ವಿಶ್ವಾಸವಿಡುತ್ತೇನೆಯೇ ಹೊರತು ಪರಿಣಾಮದಲ್ಲಲ್ಲ. ಜಗತ್ತಿನಲ್ಲಿಯೂ ಸಹ. ಇದುವರೆಗೆ ಎಲ್ಲರ ಪ್ರಯತ್ನಗಳಿಗೆ ಬೆಲೆ ಕಟ್ಟಿದ್ದಾರೆಯೇ ಹೊರತು ಪರಿಣಾಮಕ್ಕಲ್ಲ.

ಮೊನ್ನೆ ಹತ್ತು ಉಪಗ್ರಹಗಳನ್ನು ಒಮ್ಮೆಲೆ ಗಗನಕ್ಕೆ ಚಿಮ್ಮಿಸಿದ ಇಸ್ರೋ ಸಾಧನೆ ಆ ಪ್ರಯತ್ನದಲ್ಲಿಯೇ ಹೊರತು ಹತ್ತು ಉಪಗ್ರಹದಲ್ಲಲ್ಲ. ಈ “ಸಂ-ವಾದ’ ದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಕುತೂಹಲವನ್ನು ಕೇಳಬಹುದು. ಸಾಧ್ಯವಾದಷ್ಟು ಉತ್ತರಿಸಲು ಪ್ರಯತ್ನಿಸುತ್ತೇನೆ. ಅನಗತ್ಯ ವಿವಾದ ಹುಟ್ಟುಹಾಕಬೇಕೆಂದೇ ಸಂಶಯ ಬಂದರೆ ಉತ್ತರಿಸುವುದು ಕಷ್ಟ. ನಿರ್ದಿಷ್ಟ ಸಂಸ್ಥೆ, ವ್ಯಕ್ತಿ ಬಗೆಗಿನ ಕುತೂಹಲಕ್ಕಿಂತಲೂ ಕ್ಷೇತ್ರದ ಬಗೆಗಿನ ವಿಸ್ತೃತ ನೆಲೆಯಲ್ಲಿದ್ದರೆ ಚೆನ್ನ. ಸಂವಾದದ ಆಶಯದಲ್ಲೇ ಇದು ಸಾಗಬೇಕೆಂಬುದು ನನ್ನ ಬಯಕೆ.

ಕೆಲವು ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಇಂಥದೊಂದು ಸಂವಾದ ಸೂಕ್ತ ಎಂದೂ ಹೇಳಿದರು. ಅದೂ ನನ್ನ ಪ್ರಯತ್ನಕ್ಕೆ ಆಶ್ರಯವಾಯಿತು. ಪ್ರಚಲಿತ ವಿದ್ಯಮಾನದಿಂದ ಹಿಡಿದು, ಸುದ್ದಿ ಮನೆಯೊಳಗಿನ ವಿನ್ಯಾಸ, ಕೌತುಕ ಬಗ್ಗೆ ನಾನು ಅಭಿಪ್ರಾಯವನ್ನು ಹಂಚಿಕೊಳ್ಳಬಲ್ಲೆ.

 

ಬ್ಲಾಗ್ ಬಗ್ಗೆ

ನಾನು ಮತ್ತು ವಿನಾಯಕ
ನಮ್ಮ ಬಗ್ಗೆ ಹೇಳುವುದೇನಿಲ್ಲ. ನಾವಿನ್ನೂ ಪತ್ರಿಕೋದ್ಯಮದ "ವಿದ್ಯಾರ್ಥಿಗಳು". ಸುಮ್ಮನೆ ಹೀಗೆ ಅನಿಸಿದ್ದು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಕೊಡಲು ಸಾಧ್ಯವೇ ಎಂಬ ಪ್ರಯತ್ನ ಆರಂಭಿಸಿದ್ದೇವೆ. ನಿಮ್ಮೆಲ್ಲರ ಸಹಕಾರ ಅವಶ್ಯ. ನಮ್ಮಲ್ಲಿ ಎಲ್ಲವೂ ಪ್ರಕಟನೆಗೆ ಯೋಗ್ಯ. ನಿಮ್ಮ ಊರಿನ ಮಹನೀಯರ ಸಂದರ್ಶನದಿಂದ ಹಿಡಿದು ಅಗ್ರ ಲೇಖನ, ಸುದ್ದಿ ವಿಶ್ಲೇಷಣೆ, ನುಡಿಚಿತ್ರ, ಫೋಟೋಗಳು ಎಲ್ಲವೂ ಇಲ್ಲಿ ಪ್ರಕಟಣೆಗೆ ಯೋಗ್ಯ. ನೀವು ಕಳುಹಿಸಬೇಕಾದ ವಿಳಾಸ fivewoneh2009@gmail.com
View my complete profile

ಪತ್ರಿಕೆಗಳಿಗೆ ರಾಜಕೀಯ ಅನಿವಾರ್ಯವೇ?

5ಡಬ್ಲ್ಯು1ಎಚ್-FiveWoneH Copyright © 2009 BeMagazine Blogger Template is Designed by Blogger Template
In Collaboration with fifa